
22nd June 2025
ಬೆಳಗಾವಿ- ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಮೂಡಲಗಿ ಹಾಗೂ ಜ್ಞಾನದೀಪ್ತಿ ಫೌಂಡೇಶನ್ ಮೂಡಲಗಿ ಇವುಗಳ ಸಹಯೋಗದಲ್ಲಿ ದಿ 22-06-2025 ರಂದು ಮೂಡಲಗಿ ಪಟ್ಟಣದ ಶ್ರೀ ಹನುಮಾನ ಮಂದಿರದ ಸಭಾಭಾವನದಲ್ಲಿ ವಿಶ್ವ ಸಂಗೀತ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಗೀತ ಶಿಕ್ಷಕ ಶ್ರೀ ಸೋಮಶೇಖರಯ್ಯ ಕಂಠಿಕಾರಮಠ ರವರು, ಸಂಗೀತವು ಪದಗಳಲ್ಲಿ ವ್ಯಕ್ತಪಡಿಸಲಾಗದ ಮತ್ತು ಮೌನವಾಗಿರಲು ಸಾಧ್ಯವಾಗದ್ದನ್ನು ವ್ಯಕ್ತಪಡಿಸುತ್ತದೆ. ಇಂತಹ ಸಂಗೀತ ಇವತ್ತು ನಮ್ಮನ್ನು ಖಿನ್ನತೆ ಮತ್ತು ಚಿಂತೆಯಿಂದ ಮೇಲೆತ್ತಿ ನಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿ ವಿಶ್ವಭಾಷೆಯಾಗಿ ವಿಜೃಂಭಿಸುತ್ತಿದೆ ಎಂದು ಹೇಳಿದರು.
ಶ್ರೀ ಪ್ರಶಾಂತ ಮಲ್ಲನಗೌಡರ, ಶ್ರೀ ಅರ್ಜುನ ಕಾಂಬಳೆ, ಶ್ರೀ ಮಾರುತಿ ಗೌಡರ ಹಾಗೂ ಕು. ಪಲ್ಲವಿ ಇವರು ಸಂಗೀತ ಸೇವೆಯನ್ನು ನೀಡಿ ಜನರ ಮನಸ್ಸನ್ನು ಮುದಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಾ. ಸಂಜಯ ಅ ಶಿಂದಿಹಟ್ಟಿಯವರು ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಿ ಆರ್ ತರಕಾರ ಪ್ರಾಸ್ಥಾವಿಕ, ಶ್ರೀ ಎ ಎಚ್ ವಂಟಗುಡಿ ಸ್ವಾಗತ, ಶ್ರೀ ಸುರೇಶ ಲಂಕೇಪ್ಪನವರ ನಿರೂಪಣೆಯನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾವಿರ ಸಲ್ಲಾಗೋಲ, ಶ್ರೀ ಸಂತೋಷ ಪಾಟೀಲ, ಶ್ರೀ ತಿಮ್ಮಣ್ಣ ಯಾದವಾಡ, ಶ್ರೀ ಅಪ್ಪಣ್ಣ ಮುಗಳಖೊಡ, ಶ್ರೀ ವೆಂಕಟೇಶ್ ಬಡಿಗೇರ ಶ್ರೀ ವೀರಭದ್ರಪ್ಪ ಮಿಲಾನಟ್ಟಿ ಹಾಗೂ ಶ್ರೀಮತಿ ಭಾಗೀರಥಿ ಕುಳಲಿ ಉಪಸ್ಥಿತರಿದ್ದರು.
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು